ತೀರ್ಪು

ಹೋಟೆಲುಗಳಲ್ಲಿ ಥಿಯೇಟರುಗಳಲ್ಲಿ ಆಫೀಸುಗಳಲ್ಲಿ
ಅವರೇ ಇದ್ದರು
ಏಕಾಂತದಲ್ಲೂ ಅವರು ಬಂದರು ಪರಿಚಯದವರಂತೆ
ಕಣ್ಸನ್ನೆ ಮಾಡಿ ಕರೆದರು ಕೈ ಕುಲುಕಿದರು ಅಮುಕಿದರು
ನಕ್ಕರು ವಿಚಾರಿಸಿದರು ಉಪದೇಶಿಸಿದರು
ಮಾರ್ಗದ ಕೊನೆ ಮುಟ್ಟಿದಾಗಲೂ ನಿಂತೇ ಇದ್ದಾಗಲೂ
ನರನರ ಎಳೆದಾಗಲೂ ಕಣ್ಣು ಸುತ್ತಿದಾಗಲೂ ಪಂಚಾಗ್ನಿ ಮಧ್ಯೆ
ಕರಗಿದಾಗಲೂ ನಾನು
ಉದ್ದವಾಗಿ ಭಾರವಾಗಿ ಎಳೆದೆಳೆದು ಗರಗರಾ
ಉಪದೇಶಿಸಿದರು
ಅರ್ಥವಾದಂತೆ ಅನ್ನಿಸಲಿಲ್ಲ ಅನಿಸದೆ ಈಚೆಗೆ ಬಂದೆ
ಬಂದಾಗ ಅವರು ಕೆಕ್ಕರ ನೋಡಿದರು ನೋಡನೋಡುತ್ತ ಭಂಗಿ
ಬದಲಿಸಿದರು ಒಂದು ಠೀವಿಯಿಂದ ಇನ್ನೊಂದಕ್ಕೆ ಹೊಕ್ಕರು ಹೊಕ್ಕು
ಬೇತಾಳ ನೆರಳು ಬೆಳೆದು ಆಕ್ರಮಿಸಿ ಬಂದು ಹಿಡಿದು
ಕಟ್ಟಿ ಕೆಡವಿದರು ಕೋರ್ಟಿಗೆ ಎಳೆದೊಯ್ದರು
ಅಲ್ಲಿ ನಿಲ್ಲಿಸಿದರು ಬೆರಳು ತೋರಿಸಿ ಆರೋಪಿಸಿದರು
ಪ್ರಶ್ನೆಗಳನ್ನು ಹಾಕಿದರು ಉತ್ತರಿಸಿದರು ವಾದಿಸಿದರು
ತೀರ್ಪಿತ್ತರು ಕೊನೆಗೆ ಇಂಚಿಂಚಾಗಿ ಕೊಂದರು

[ಕಾಫ್ಕಾ’ನ ದಿ ಟ್ರಯಲ್ ಓದಿದ ಮೇಲೆ ಬರೆದುದು]
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾಧವಿಯ ವ್ಯಥ ಕಥೆ
Next post ಜೀವನ ಒಂದು ಪಯಣ

ಸಣ್ಣ ಕತೆ

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

cheap jordans|wholesale air max|wholesale jordans|wholesale jewelry|wholesale jerseys